ಮಾಘಿ ಶ್ರೀ ಗಣೇಶ ಜಯಂತಿ ಅಂದರೇನು?
ಮಾಘಿ ಶ್ರೀ ಗಣೇಶ ಜಯಂತಿ ಎಂದರೆ ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನ. ಅಂದು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಶ್ರೀ ಗಣೇಶ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದ ವೈಶಿಷ್ಟ್ಯವೇನೆಂದರೆ, ಈ ತಿಥಿಯಂದು ಶ್ರೀ ಗಣೇಶನ ತತ್ತ್ವವು ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. 2024 ರಲ್ಲಿ ಶ್ರೀ ಗಣೇಶ ಜಯಂತಿಯನ್ನು ಮಂಗಳವಾರ, 13 ಫೆಬ್ರವರಿಯಂದು ಆಚರಿಸಲಾಗುವುದು.

ಗಣಪತಿಯ ಈ ಸಾತ್ತ್ವಿಕ ಚಿತ್ರವನ್ನು ತಮ್ಮ ಕಣ್ಮುಂದೆ ಇಟ್ಟುಕೊಂಡು ನಾಮ ಜಪಿಸಿ !
ಮಾಘಿ ಶ್ರೀ ಗಣೇಶ ಜಯಂತಿಯ ಮಹತ್ವವೇನು?
ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲಕರವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಯಂದು ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.
ಮಾಘಿ ಶ್ರೀ ಗಣೇಶ ಜಯಂತಿಯಂದು ಇವನ್ನು ಮಾಡಿ
👉🏻 ಸಾಧ್ಯವಾದರೆ ಹತ್ತಿರದ ಗಣಪತಿಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕುಳಿತು ನಾಮ ಜಪಿಸಿ (ಆಡಿಯೋ ಕೆಳಗೆ ನೀಡಲಾಗಿದೆ)
👉🏻 ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿಯೇ ಆದಷ್ಟು ಹೆಚ್ಚು ಗಣಪತಿಯ ನಾಮ ಜಪಿಸಿ ಮತ್ತು ಪ್ರಾರ್ಥನೆ ಮಾಡಿ
👉🏻 ಮನೆಯಂಗಳದಲ್ಲಿ ಗಣಪತಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿ (ಇದರ ಮಾದರಿಯನ್ನು ಕೆಳಗೆ ನೀಡಿದ್ದೇವೆ)
👉🏻 ಭಾವಪೂರ್ಣವಾಗಿ ಗಣಪತಿಯ ಪೂಜೆ ಅರ್ಚನೆಯನ್ನು ಮಾಡಿ
👉🏻 ಸಾಯಂಕಾಲ ಶ್ರೀ ಗಣಪತಿ ಅಥರ್ವಶೀರ್ಷ ಪಠಿಸಿ (ಆಡಿಯೋವನ್ನು ಕೆಳಗೆ ನೀಡಿದ್ದೇವೆ)
👉🏻 ಸದಾಕಾಲ ನಾಮ ಜಪಿಸಲು ನೆನಪಾಗುವಂತೆ ಶ್ರೀ ಗಣಪತಿಯ ನಾಮಪಟ್ಟಿಯನ್ನು ಅಂಟಿಸಿ
ಮಾಘಿ ಶ್ರೀ ಗಣೇಶ ಜಯಂತಿಯಂದು ಈ ನಾಮ ಜಪಿಸಿ
ದೇವರ ಬಗ್ಗೆ ಭಕ್ತಿಭಾವ ನಿರ್ಮಾಣವಾದ ನಂತರ ದೇವರ ನಾಮಜಪವನ್ನು ಹೇಗೆ ಮಾಡಿದರೂ ನಡೆಯುತ್ತದೆ. ಆದರೆ ಭಕ್ತಿಭಾವವು ಬೇಗನೆ ನಿರ್ಮಾಣವಾಗಲು ಮತ್ತು ದೇವರ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ನಾಮಜಪದ ಉಚ್ಚಾರ ಯೋಗ್ಯವಾಗಿರುವುದು ಆವಶ್ಯಕವಾಗಿದೆ. ಅದರೊಂದಿಗೆ ನಾಮಜಪದ ಅರ್ಥವನ್ನು ಮುಂದಿಟ್ಟುಕೊಂಡು ನಾಮ ಜಪಿಸಿದರೆ ಜಪವು ಇನ್ನಷ್ಟು ಭಾವಪೂರ್ಣವಾಗಲು ಸಹಾಯವಾಗುತ್ತದೆ.
ಸನಾತನದ ಸಾಧಕರು ಸಂತರ ಮಾರ್ಗದರ್ಶನದಲ್ಲಿ ತಯಾರಿಸಿದ || ಓಂ ಗಂ ಗಣಪತಯೇ ನಮಃ || ನಾಮಜಪ ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ.
ಈ ನಾಮವನ್ನು ಈ ರೀತಿ ಜಪಿಸುವುದರಿಂದ ತಮಗೇನಾದರೂ ಅನುಭೂತಿ ಬಂದಿದ್ದಲ್ಲಿ ಅಥವಾ ಏನಾದರೂ ಕೇಳಬೇಕಾದಲ್ಲಿ ಕೆಳಗೆ ತಮ್ಮ ಅಭಿಪ್ರಾಯ (ಕಾಮೆಂಟ) ತಿಳಿಸಿ, ಅಥವಾ ನಮಗೆ ಮಿಂಚಂಚೆ (ಈಮೇಲ್) ಕಳುಹಿಸಿ.

ಗಣಪತಿಯ ಈ ಸಾತ್ತ್ವಿಕ ನಾಮಪಟ್ಟಿಯನ್ನು ತಮ್ಮ ಕಣ್ಮುಂದೆ ಇಟ್ಟುಕೊಂಡು ನಾಮ ಜಪಿಸಿ !
ಸನಾತನ ನಿರ್ಮಿಸಿದ ಶ್ರೀ ಗಣಪತಿಯ ಸಾತ್ತ್ವಿಕ ನಾಮಪಟ್ಟಿಯನ್ನು ಮನೆಯಲ್ಲಿ ಅಂಟಿಸುವುದರಿಂದ ಸಾತ್ತ್ವಿಕತೆಯೊಂದಿಗೆ ನಮಗೆ ನಾಮ ಜಪಿಸಲು ನೆನಪಾಗುತ್ತದೆ. (ತಮಗೂ ಈ ನಾಮಪಟ್ಟಿ ಬೇಕಾಗಿದ್ದಲ್ಲಿ ಅದರಲ್ಲಿ ನೀಡಿರುವ ಫೋನ್ ನಂಬರಿಗೆ ಕರೆ ನೀಡಿ.)
ಶ್ರೀ ಗಣಪತಿ ಅಥರ್ವಶೀರ್ಷ ಸ್ತೋತ್ರ
ಥರ್ವವೆಂದರೆ ಉಷ್ಣ (ಬಿಸಿ), ಅಥರ್ವವೆಂದರೆ ಶಾಂತಿ ಮತ್ತು ಶೀರ್ಷವೆಂದರೆ ಮಸ್ತಕ. ಯಾವುದರ ಪುರಶ್ಚರಣದಿಂದ (ಪಠಿಸುವುದರಿಂದ) ಮಸ್ತಕಕ್ಕೆ ಶಾಂತಿಯು ಲಭಿಸುತ್ತದೆಯೋ, ಅದುವೇ ಅಥರ್ವಶೀರ್ಷ !
ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸುವ ನಿಯಮಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !
ಸನಾತನ ಸಂವಾದ ಆನ್ಲೈನ್ ಸತ್ಸಂಗ

ಪ್ರತಿಯೊಂದು ಹಬ್ಬ ಅಂತೆಯೇ ಪ್ರತಿದಿನವೂ ದೇವರ ಕೃಪೆಯನ್ನು ಹೇಗೆ ಅನುಭವಿಸಬಹುದು ಎಂದು ತಿಳಿದುಕೊಳ್ಳಬೇಕೇ? ಹಾಗಾದರೆ ಬನ್ನಿ, ‘ಸನಾತನ ಸಂವಾದ’ ಆನ್ಲೈನ್ ಸತ್ಸಂಗದಲ್ಲಿ ಭಾಗವಹಿಸಿ…
ಶ್ರೀ ಗಣಪತಿಗೆ ಮಾಡಬಹುದಾದ ಪ್ರಾರ್ಥನೆ

ಅ. ಹೇ ಗಜಾನನಾ, ಈ ಪೂಜೆಯ ಮಾಧ್ಯಮದಿಂದ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ಉತ್ಪನ್ನವಾಗಲಿ.
ಆ. ಈ ಪೂಜೆಯ ಮಾಧ್ಯಮದಿಂದ ಪ್ರಕ್ಷೇಪಿಸುವ ಚೈತನ್ಯವು ನಿನ್ನ ಕೃಪೆಯಿಂದ ನನ್ನಿಂದ ಹೆಚ್ಚು ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.
ಮಾಘಿ ಶ್ರೀ ಗಣೇಶ ಜಯಂತಿಯಂದು ಗಣಪನ ಪೂಜೆಯನ್ನು ಹೀಗೆ ಮಾಡಿ !
ಯಾವ ಬೆರಳಿನಿಂದ ಗಣಪತಿಗೆ ಗಂಧವನ್ನು ಹಚ್ಚಬೇಕು? | ಅನಾಮಿಕಾ |
ಯಾವ ಹೂವುಗಳನ್ನು ಅರ್ಪಿಸಬೇಕು? | ಕೆಂಪು ದಾಸವಾಳ / ಕೆಂಪು ಬಣ್ಣದ ಇತರ ಹೂವುಗಳು |
ಯಾವ ಸುಗಂಧದ ಊದುಬತ್ತಿ (ಅಗರ್ಬತ್ತಿ) ಹಚ್ಚಬೇಕು? | ಗಂಧ (ಚಂದನ) / ಕೇದಗೆ / ಮಲ್ಲಿಗೆ |
ಎಷ್ಟು ಊದುಬತ್ತಿಗಳನ್ನು ಹಚ್ಚಬೇಕು? | ಎರಡು |
ಯಾವ ಸುಗಂಧದ ಅತ್ತರು ಅರ್ಪಿಸಬೇಕು? | ಹೀನಾ |
ಎಷ್ಟು ಪ್ರದಕ್ಷಿಣೆಗಳನ್ನು ಹಾಕಬೇಕು? | ಎಂಟು ಅಥವಾ ಎಂಟರ ಪಟ್ಟಿನಲ್ಲಿ |
ಎಷ್ಟು ದೂರ್ವೆಗಳನ್ನು ಅರ್ಪಿಸಬೇಕು? | ೩, ೫, ೭ ಹೀಗೆ ಬೆಸ ಸಂಖ್ಯೆಯ ಗರಿಗಳಿರುವ ಎಳೆಯ ದೂರ್ವೆ ಅರ್ಪಿಸಬಹುದು. ವಿಶೇಷವಾಗಿ ೨೧ ದೂರ್ವೆಗಳನ್ನು ಅರ್ಪಿಸಲಾಗುತ್ತದೆ. |
ಗಣಪತಿಗೆ ಗಂಧ, ಅರಿಶಿನ – ಕುಂಕುಮ ಹೇಗೆ ಅರ್ಪಿಸುವುದು ?

ಶ್ರೀ ಗಣೇಶನಿಗೆ ಪೂಜೆಯನ್ನು ಮಾಡುವಾಗ ಬಲಗೈಯ ಅನಾಮಿಕೆಯಿಂದ (ಕಿರುಬೆರಳಿನ ಪಕ್ಕದ ಬೆರಳಿನಿಂದ) ಗಂಧ ಹಚ್ಚಬೇಕು. ಅರಿಶಿನ ಕುಂಕುಮವನ್ನು ಅರ್ಪಿಸುವಾಗ ಬಲಗೈಯ ಹೆಬ್ಬೆರಳು ಮತ್ತು ಅನಾಮಿಕೆಯನ್ನು ಜೋಡಿಸಿ ಮೊದಲಿಗೆ ಅರಿಶಿನ ನಂತರ ಕುಂಕುಮವನ್ನು ಚರಣಗಳ ಮೇಲೆ ಅರ್ಪಿಸಬೇಕು. ಹೀಗೆ ಹೆಬ್ಬೆರಳು ಮತ್ತು ಅನಾಮಿಕೆಯನ್ನು ಜೋಡಿಸಿ ತಯಾರಾಗುವ ಮುದ್ರೆಯಿಂದ ಪೂಜೆ ಮಾಡುವವರ ಅನಾಹತ ಚಕ್ರವು ಜಾಗೃತವಾಗುತ್ತಾದೆ. ಇದರಿಂದ ಭಕ್ತಿಭಾವವು ನಿರ್ಮಾಣವಾಗಲು ಸಹಾಯವಾಗುತ್ತದೆ.
ಗಣಪತಿಗೆ ಹೂವುಗಳನ್ನು ಹೇಗೆ ಅರ್ಪಿಸಬೇಕು ?

ಶ್ರೀಗಣಪತಿಯ ಬಣ್ಣವು ಕೆಂಪಾಗಿರುತ್ತದೆ. ಅವನ ಪೂಜೆಯಲ್ಲಿ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನವನ್ನು ಬಳಸುತ್ತಾರೆ. ಅವುಗಳ ಕೆಂಪು ಬಣ್ಣದಿಂದ ವಾತಾವರಣದಲ್ಲಿರುವ ಶ್ರೀಗಣಪತಿಯ ಪವಿತ್ರಕಗಳು ವಿಗ್ರಹ/ಚಿತ್ರದ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ವಿಗ್ರಹ/ಚಿತ್ರವನ್ನು ಜಾಗೃತಗೊಳಿಸಲು ಸಹಾಯವಾಗುತ್ತದೆ.
ದೇವರ ಚರಣಗಳಲ್ಲಿ ವಿಶಿಷ್ಟ ಸಂಖ್ಯೆ ಮತ್ತು ವಿಶಿಷ್ಟ ಆಕಾರದಲ್ಲಿ ಹೂವುಗಳನ್ನು ಅರ್ಪಿಸಿದರೆ ಆ ಹೂವುಗಳಲ್ಲಿ ಆ ದೇವತೆಯ ತತ್ತ್ವವು ಬೇಗ ಆಕರ್ಷಿಸಲ್ಪಡುತ್ತದೆ. ಈ ತತ್ತ್ವಕ್ಕನುಸಾರ, ಶ್ರೀ ಗಣಪತಿಗೆ ಹೂವುಗಳನ್ನು ಅರ್ಪಿಸುವಾಗ, ೮ ಅಥವಾ ೮ರ ಗುಣಾಕಾರದಲ್ಲಿ ಅರ್ಪಿಸಬೇಕು. ದಾಸವಾಳ ಅಥವಾ ಇತರ ಹೂವುಗಳನ್ನು ಅರ್ಪಿಸುವಾಗ ಹೂವಿನ ತೊಟ್ಟು ದೇವತೆಯ ಚರಣಗಳತ್ತ ಮತ್ತು ಹೂವಿನ ದಳಗಳು ನಮ್ಮತ್ತ ಇರುವಂತೆ ಅರ್ಪಿಸಬೇಕು.
ಟಿಪ್ಪಣಿ : ಪವಿತ್ರಕಗಳು – ದೇವತೆಯ ಸೂಕ್ಷ್ಮಾತಿಸೂಕ್ಷ್ಮ ಕಣಗಳು
ಗಣೇಶನಿಗೆ ಸಂಬಂಧಿಸಿದ ಹಬ್ಬಗಳಂದು ಬಿಡಿಸಬೇಕಾದ ರಂಗೋಲಿಗಳು

ಗಣೇಶನಿಗೆ ಸಂಬಂಧಿಸಿದ ಸನಾತನ ನಿರ್ಮಿಸಿದ ಉತ್ಪಾದನೆಗಳು

ಗಣೇಶ ಭಕ್ತರ ಫೋನಿನಲ್ಲಿ ಇರಲೇಬೇಕಾದ ಆ್ಯಪ್ !
iOS ಮೇಲೆ ಕ್ಲಿಕ್ ಮಾಡಿ, ನಿಮ್ಮ ಫೋನಿನಲ್ಲಿ ಈ ಆ್ಯಪ್ ಇಂದೇ ಡೌನ್ಲೋಡ್ ಮಾಡಿಕೊಳ್ಳಿ! ಈ ಮಾಹಿತಿಯು ನಮ್ಮ ಜಾಲತಾಣದಲ್ಲಿಯೂ ಲಭ್ಯವಿದೆ. ಅದನ್ನು ಓದಲು ಜಾಲತಾಣದ ಮೇಲೆ ಕ್ಲಿಕ್ ಮಾಡಿ.