ಈಗ ಆಪತ್ಕಾಲದ ತೀವ್ರತೆಯು ಹೆಚ್ಚಾಗುತ್ತಿರುವುದರಿಂದ ಸಾಧಕರ ಮೇಲೆ ಸೂಕ್ಷ್ಮ ಮತ್ತು ಸ್ಥೂಲದಲ್ಲಿ ಹಲ್ಲೆಗಳಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಆದುದರಿಂದ ಎಲ್ಲ ಸಾಧಕರು ಪ್ರತಿದಿವಸ ತಮ್ಮೊಂದಿಗೆ ರಕ್ಷಾಯಂತ್ರವನ್ನು ಇಟ್ಟುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಮುಂದೆ ನೀಡಲಾಗಿದೆ.

೧. ಎರಡೂ ಬದಿಯಲ್ಲಿ ಬಿಳಿಯಿರುವ ಹಾಳೆಯ ಮೇಲೆ ಈ ರಕ್ಷಾಯಂತ್ರವನ್ನು ಮುದ್ರಿಸಿಕೊಳ್ಳಿ. ಮಧ್ಯದಲ್ಲಿರುವ (ನಾಮ ಎಂದು ಬರೆದಿರುವ ಜಾಗದಲ್ಲಿ) ಗೋಲಾಕಾರದಲ್ಲಿ ತಮ್ಮ ಹೆಸರನ್ನು ಬರೆಯಿರಿ.
೨. ಈ ರಕ್ಷಾಯಂತ್ರದ ಸ್ಪರ್ಶವು ಸತತವಾಗಿ ನಿಮ್ಮ ಶರೀರಕ್ಕೆ ಆಗುತ್ತಿರಬೇಕು. ಆದುದರಿಂದ ಈ ರಕ್ಷಾಯಂತ್ರವನ್ನು ಒಂದು ತಾಯಿತದಲ್ಲಿ ಕಟ್ಟಿ ಅದನ್ನು ಕೆಂಪು ಅಥವಾ ಕಪ್ಪು ದಾರದಿಂದ ಕೈ ಅಥವಾ ಕೊರಳಿಗೆ ಕಟ್ಟಿಕೊಳ್ಳಿ.
೩. ಪ್ರತಿದಿವಸ ಊದುಬತ್ತಿಯ ಧೂಪದಿಂದ ಈ ಯಂತ್ರವನ್ನು ಶುದ್ಧೀಕರಿಸಿ.
೪. ಮಾಸಿಕ ಸರದಿಯ ಸಮಯದಲ್ಲಿ ಸಾಧಿಕೆಯರು ಈ ಯಂತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳಬಾರದು. ಮಾಸಿಕ ಸರದಿ ಮುಗಿದ ನಂತರ ಊದುಬತ್ತಿಯಿಂದ ಶುದ್ಧೀಕರಿಸಿ ಉಪಯೋಗಿಸಿ.
– (ಪರಾತ್ಪರ ಗುರು) ಪಾಂಡೆ ಮಹಾರಾಜ, ಸನಾತನ ಆಶ್ರಮ, ದೇವದ (೩೦.೮.೨೦೧೮)
ಹೊಸ ವಸ್ತುಗಳನ್ನು ಬಳಸುವ ಮೊದಲು ಇದನ್ನು ಮಾಡಿ…
ಸಾಧನೆಯಲ್ಲಿ ಅಡಚಣೆಗಳನ್ನು ದೂರಗೊಳಿಸಲು ‘ನಾಮಜಪದ ಮಂಡಲ ಹಾಕುವ’ ಉಪಾಯ
ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ
ಅಂಗೈಗಳನ್ನು ಜೋಡಿಸಿ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ!
ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’